ಚಿಂಚೋಳಿಯಲ್ಲಿ ಇಂದು ಐತಿಹಾಸಿಕ ‘ಹಿಂದೂ ಜಾಗೃತಿ ಸಮಾವೇಶ’: ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯೋತ್ಸವದ ಸಂಭ್ರಮ
ಕಲಬುರಗಿ (ಚಿಂಚೋಳಿ): ಗಡಿನಾಡು ಚಿಂಚೋಳಿಯಲ್ಲಿ ಇಂದು ಹಿಂದೂ ಬಾಂಧವರಲ್ಲಿ ಹೊಸ ಸಂಚಲನ ಮೂಡಿಸುವ ಬೃಹತ್ ಕಾರ್ಯಕ್ರಮವೊಂದು ಸಜ್ಜಾಗಿದೆ. ಹಿಂದೂ ಸಾಮ್ರಾಜ್ಯ ಸಂಸ್ಥಾಪಕ, ಮರಾಠಾ ಸಿಂಹ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯೋತ್ಸವದ ಪ್ರಯುಕ್ತ ಚಿಂಚೋಳಿಯ ಛತ್ರಪತಿ ಶಿವಾಜಿ ಯುವಕ ಸಂಘ (ರಿ.) ವತಿಯಿಂದ ಇಂದು (ಭಾನುವಾರ) ಸಂಜೆ ಹಿಂದೂ ಜಾಗೃತಿ ಸಮಾವೇಶ’ ವನ್ನು ಹಮ್ಮಿಕೊಳ್ಳಲಾಗಿದೆ.
‘ಕನ್ನಡ ಸಾಮ್ರಾಟ್’ ವಿಶೇಷ ವರದಿ:
ಕಳೆದ 11 ವರ್ಷಗಳಿಂದ ಸಮಾಜದಲ್ಲಿ ಧಾರ್ಮಿಕ ಹಾಗೂ ರಾಷ್ಟ್ರೀಯ ಪ್ರಜ್ಞೆಯನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಛತ್ರಪತಿ ಶಿವಾಜಿ ಯುವಕ ಸಂಘವು, ತನ್ನ 11ನೇ ವಾರ್ಷಿಕೋತ್ಸವದ ಅಂಗವಾಗಿ ಈ ಬೃಹತ್ ಸಮಾವೇಶವನ್ನು ಆಯೋಜಿಸಿದೆ. ಯುವಜನತೆಯಲ್ಲಿ ಧರ್ಮ ಜಾಗೃತಿ ಮತ್ತು ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ವಸಂತ ಇಟಗಿ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಹಾಗೂ ದಿವ್ಯ ಸಾನಿಧ್ಯ:
ಈ ಪ್ರತಿಷ್ಠಿತ ಸಮಾವೇಶವು ನಾಡಿನ ಹೆಸರಾಂತ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ. ಜಮಖಂಡಿ ತಾಲೂಕಿನ ಮೈಗೂರ ಸುಕ್ಷೇತ್ರದ ಶ್ರೀ ಶಿವಾನಂದ ಮಠದ ಪರಮ ಪೂಜ್ಯ ಶ್ರೀ ಗುರುಪ್ರಸಾದ ಮಹಾಸ್ವಾಮೀಜಿ ಹಾಗೂ ಸೊಂತ ಸುಕ್ಷೇತ್ರ ನರನಾಳದ ಪೂಜ್ಯ ಷ.ಬ್ರ. ಶ್ರೀ ಶಿವಕುಮಾರ ಶಿವಾಚಾರ್ಯರು ಕಾರ್ಯಕ್ರಮದ ನೇತೃತ್ವ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ದಿಕ್ಕೂಚಿ ಭಾಷಣ: ಹಿಂದೂ ಸಮಾಜದ ಪ್ರಮುಖ ಮುಖಂಡರು ಹಾಗೂ ಕಾರ್ಕಳದ ಪ್ರಖರ ಹಿಂದೂ ವಾಗ್ಮಿಗಳಾದ ಶ್ರೀ ಶ್ರೀಕಾಂತ ಶೆಟ್ಟಿ ಅವರು ಈ ಸಮಾವೇಶದಲ್ಲಿ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಅವರ ಭಾಷಣವು ಯುವಕರಲ್ಲಿ ಹೊಸ ಹುರುಪು ತುಂಬುವ ನಿರೀಕ್ಷೆಯಿದೆ.
ಕಾರ್ಯಕ್ರಮದ ವಿವರ:
-
ದಿನಾಂಕ: 08-03-2026, ಭಾನುವಾರ
-
ಸಮಯ: ಸಂಜೆ 05:30ಕ್ಕೆ ಸರಿಯಾಗಿ
-
ಸ್ಥಳ: ದಿ. ಶ್ರೀ ವೈಜನಾಥ ಪಾಟೀಲ ಕಲ್ಯಾಣ ಮಂಟಪ, ಚಿಂಚೋಳಿ (ತಾ: ಚಿಂಚೋಳಿ, ಜಿ: ಕಲಬುರಗಿ-585307)
“ತಾವು ಬನ್ನಿ, ತಮ್ಮವರನ್ನು ಕರೆ ತನ್ನಿ, ಬನ್ನಿ ರಾಷ್ಟ್ರಕಾರ್ಯದಲ್ಲಿ ಕೈ ಜೋಡಿಸೋಣ” ಎಂಬ ಪ್ರೀತಿಯ ಕರೆಯೊಂದಿಗೆ, ನಿಗದಿತ ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷರು ವಸಂತ್ ಇಟಾಗಿ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಸ್ತ ಹಿಂದೂ ಬಾಂಧವರಲ್ಲಿ ವಿನಂತಿಸಿಕೊಂಡಿದ್ದಾರೆ.
💐 ‘ಕನ್ನಡ ಸಾಮ್ರಾಟ್’ ಸಂಸ್ಥಾಪಕ-ಸಂಪಾದಕರ ವಿಶೇಷ ಶುಭಾಶಯಗಳು 💐
“ಚಿಂಚೋಳಿಯ ಛತ್ರಪತಿ ಶಿವಾಜಿ ಯುವಕ ಸಂಘವು ಸತತ 11 ವರ್ಷಗಳಿಂದ ಹಿಂದೂ ಸಮಾಜವನ್ನು ಒಗ್ಗೂಡಿಸುವ ಮತ್ತು ಯುವಕರಲ್ಲಿ ಶಿವಾಜಿ ಮಹಾರಾಜರ ಶೌರ್ಯ, ಪರಾಕ್ರಮಗಳ ಆದರ್ಶಗಳನ್ನು ಬಿತ್ತುವ ಶ್ಲಾಘನೀಯ ಕಾರ್ಯ ಮಾಡುತ್ತಾ ಬಂದಿದೆ. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಈ ಸಂಘದ ಹೆಜ್ಜೆಗಳು ಇತರರಿಗೆ ಮಾದರಿಯಾಗಿವೆ.
ಇಂದಿನ ಈ ‘ಹಿಂದೂ ಜಾಗೃತಿ ಸಮಾವೇಶ’ವು ಅಭೂತಪೂರ್ವ ಯಶಸ್ಸು ಕಾಣಲಿ. ಶ್ರೀಕಾಂತ ಶೆಟ್ಟಿಯವರ ವಾಗ್ಝರಿ, ನಾಡಿನ ಪರಮ ಪೂಜ್ಯ ಸ್ವಾಮೀಜಿಗಳ ಆಶೀರ್ವಾದದಿಂದ ಚಿಂಚೋಳಿಯ ಮಣ್ಣಿನಲ್ಲಿ ಹಿಂದೂ ಧರ್ಮದ ಜಾಗೃತಿಯ ಕಹಳೆ ಮೊಳಗಲಿ ಎಂದು ‘ಕನ್ನಡ ಸಾಮ್ರಾಟ್’ ನ್ಯೂಸ್ ಪೋರ್ಟಲ್ ಪರವಾಗಿ ಸಂಪೂರ್ಣ ಬೆಂಬಲ ಹಾಗೂ ತುಂಬು ಹೃದಯದ ಶುಭಾಶಯಗಳನ್ನು ಕೋರುತ್ತೇನೆ. ಹರ್ ಹರ್ ಮಹಾದೇವ್! ಜೈ ಭವಾನಿ, ಜೈ ಶಿವಾಜಿ!”
ಶಿವ ಎಸ್ ಎಸ್- ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರು, ಕನ್ನಡ ಸಾಮ್ರಾಟ್ ನ್ಯೂಸ್ ಪೋರಟಲ್
#HinduJagrutiSamavesha #ಹಿಂದೂಜಾಗೃತಿಸಮಾವೇಶ #ShivajiJayanti #ಶಿವಾಜಿಜಯಂತಿ #ChhatrapatiShivajiMaharaj #Chincholi #ಚಿಂಚೋಳಿ #Kalaburagi #Gulbarga #KalaburagiNews #ChincholiUpdates







Nice