ಲ್ಯಾಂಡ್ಲಾರ್ಡ್ ಸಿನಿಮಾ ವಿಮರ್ಶೆ: ಅಸಮಾನತೆಯ ವಿರುದ್ಧ ರಾಚಯ್ಯನ ಕೊಡಲಿ ಏಟು!
ಬೆಂಗಳೂರು: ಸ್ಯಾಂಡಲ್ವುಡ್ನ ‘ಸಲಗ’ ದುನಿಯಾ ವಿಜಯ್ ನಟನೆಯ ಬಹುನಿರೀಕ್ಷಿತ ‘ಲ್ಯಾಂಡ್ಲಾರ್ಡ್’ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜಡೇಶ್ ಕೆ. ಹಂಪಿ ನಿರ್ದೇಶನದ ಈ ಚಿತ್ರವು ಹಳ್ಳಿಯ ಸೊಗಡಿನೊಂದಿಗೆ ಶೋಷಿತರ ಧ್ವನಿಯಾಗಿ ಮೂಡಿಬಂದಿದೆ.
ಭೂಮಿ ಮತ್ತು ಅಧಿಕಾರದ ಹಪಾಹಪಿಯ ನಡುವೆ ನಲುಗುವ ಬಡವರ ಸಂಕಷ್ಟ, ಪರಂಪರಾಗತ ಶೋಷಣೆ ಹಾಗೂ ಕಾನೂನಾತ್ಮಕ ಬದಲಾವಣೆಗಾಗಿ ಹಂಬಲಿಸುವ ರಾಚಯ್ಯನ (ದುನಿಯಾ ವಿಜಯ್) ಹೋರಾಟ ಪ್ರೇಕ್ಷಕರ ಮನ ಗೆದ್ದಿದೆ. ವಿಜಯ್ ಅವರ ತೂಕದ ನಟನೆ ಹಾಗೂ ರಾಜ್ ಬಿ. ಶೆಟ್ಟಿ ಅವರ ಕ್ರೂರ ವಿಲನ್ ಪಾತ್ರ ಚಿತ್ರದ ಹೈಲೈಟ್. ಕೌಟುಂಬಿಕ ಸೆಂಟಿಮೆಂಟ್ ಮತ್ತು ಮಾಸ್ ಆಕ್ಷನ್ ಸಮಪ್ರಮಾಣದಲ್ಲಿದ್ದು, ಥಿಯೇಟರ್ಗಳು ಈಗಾಗಲೆ ಹೌಸ್ಫುಲ್ ಆಗಿವೆ. ಸಾಮಾಜಿಕ ನ್ಯಾಯದ ಸಂದೇಶ ಸಾರುವ ಈ ‘ಲ್ಯಾಂಡ್ಲಾರ್ಡ್’ ಪ್ರತಿಯೊಬ್ಬರೂ ನೋಡಬೇಕಾದ ಸಿನಿಮಾ.
#KannadaSamrat
#KannadaNews
#MovieReview
#FilmUpdate
#BreakingNewsKannada




