ಬಹುಜನ ನಾಯಕಿ,ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಕ್ಕ ಮಾಯಾವತಿ ರವರ 70 ನೇ ಜನ್ಮ ದಿನದ ಪ್ರಯುಕ್ತ ಚಿಂಚೋಳಿಯ ಡಾ.ಬಿ.ಆರ್. ಅಂಬೇಡ್ಕರ್ ರವರ ಭವನದ ಕ್ರೀಡಾಂಗಣದಲ್ಲಿ ಬಹುಜನ ನಾಯಕ ಗೌತಮ್ ಬಿ ಬೊಮ್ಮನಹಳ್ಳಿರವರ ನೇತೃತ್ವದಲ್ಲಿ, ಬೊಮ್ಮನಹಳ್ಳಿ ಬ್ರದರ್ಸ್ ವತಿಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ವಿವಿಧ ಸಮಾಜ ಮುಖಂಡರುಗಳ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಪಂದ್ಯಾವಳಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು,ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು 20 ಕ್ಕಿಂತಲೂ ಅಧಿಕ ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವಾಗಿ 25,000, ದ್ವಿತೀಯ ಬಹುಮಾನ 15,000 ತೃತೀಯ ಬಹುಮಾನವಾಗಿ 10,000 ಸಾವಿರ ರೂಪಾಯಿ ನಗದುಗಳೊಂದಿಗೆ ಕಪ್ ಒಳಗೊಂಡಿದ್ದು,ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ನೀಡುತ್ತಿದ್ದು ಈ ಸಂದರ್ಭದಲ್ಲಿ ಅನೇಕ ಕ್ರೀಡಾಭಿಮಾನಿಗಳು, ಕ್ರೀಡಾಸಕ್ತರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.





💐💐🙏🙏