ರಾಜಶೇಖರ ಮುಸ್ತಾರಿ ಅವರಿಗೆ ರಾಜ್ಯ ಮಟ್ಟದ ‘ಶಿಕ್ಷಣ ಚೈತನ್ಯ’ ಪ್ರಶಸ್ತಿ ಗೌರವ
ಬೆಂಗಳೂರಿನಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ, ಚಿಂಚೋಳಿಯ ರಾಮಚಂದ್ರ ಪ್ರೌಢಶಾಲೆಯ ಮುಖ್ಯಗುರುಗಳಾದ ರಾಜಶೇಖರ ಮುಸ್ತಾರಿ ಅವರಿಗೆ ಪ್ರತಿಷ್ಠಿತ ‘ರಾಜ್ಯ ಮಟ್ಟದ ಶಿಕ್ಷಣ ಚೈತನ್ಯ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅವರ ಶೈಕ್ಷಣಿಕ ಸೇವೆಗೆ ತಂದ ಗೌರವವಿದು.
ಮುಸ್ತಾರಿ ಅವರ ಸಾಧನೆಗೆ ಶಾಲಾ ಸಿಬ್ಬಂದಿ ವರ್ಗ ಮತ್ತು ಸ್ನೇಹಿತರು ಸಮಾಜ ಬಾಂಧವರು ಹರ್ಷ ವ್ಯಕ್ತಪಡಿಸಿದ್ದಾರೆ.





