Home » ನ್ಯೂಸ್ » ವಿದೇಶ » ಯುಎಇ ಅನಿವಾಸಿ ಭಾರತೀಯರಿಗೆ ಬಂಪರ್ ಗಿಫ್ಟ್: ಬಜೆಟ್ 2026ರಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ನಿಯಮ ಸಡಿಲಿಕೆ!

ಯುಎಇ ಅನಿವಾಸಿ ಭಾರತೀಯರಿಗೆ ಬಂಪರ್ ಗಿಫ್ಟ್: ಬಜೆಟ್ 2026ರಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ನಿಯಮ ಸಡಿಲಿಕೆ!

ಯುಎಇ ಅನಿವಾಸಿ ಭಾರತೀಯರಿಗೆ ಬಂಪರ್ ಗಿಫ್ಟ್: ಬಜೆಟ್ 2026ರಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ನಿಯಮ ಸಡಿಲಿಕೆ!

ನವದೆಹಲಿ/ದುಬೈ: ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಅನಿವಾಸಿ ಭಾರತೀಯರ (NRI) ದಶಕಗಳ ಬೇಡಿಕೆಗೆ ಕೊನೆಗೂ ಜಯ ಸಿಕ್ಕಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾಮನ್ ಅವರು ಮಂಡಿಸಿದ 2026ರ ಕೇಂದ್ರ ಬಜೆಟ್ನಲ್ಲಿ, ವಿದೇಶದಿಂದ ಭಾರತಕ್ಕೆ ಚಿನ್ನಾಭರಣ ತರುವ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಇದು ಯುಎಇ ಸೇರಿದಂತೆ ವಿಶ್ವದಾದ್ಯಂತ ಇರುವ ಭಾರತೀಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.

​’ಔಟ್ ಡೇಟೆಡ್’ ನಿಯಮಕ್ಕೆ ಕೊನೆ: ಮೌಲ್ಯದ ಮಿತಿ ರದ್ದು

​ಹಳೆಯ ನಿಯಮದ ಪ್ರಕಾರ, ಚಿನ್ನದ ತೂಕದ ಜೊತೆಗೆ ಅದರ ‘ಮೌಲ್ಯ’ (Value Cap) ಕೂಡ ಅನ್ವಯವಾಗುತ್ತಿತ್ತು. ಆದರೆ ಪ್ರಸ್ತುತ ಬಂಗಾರದ ಬೆಲೆ ಗಗನಕ್ಕೇರಿರುವುದರಿಂದ, ಹಳೆಯ ಮೌಲ್ಯದ ಮಿತಿಗಳು ಅನಿವಾಸಿಗಳಿಗೆ ದೊಡ್ಡ ತಲೆನೋವಾಗಿತ್ತು. ಈಗ ಆ ‘ಮೌಲ್ಯದ ಮಿತಿ’ಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಕೇವಲ ತೂಕದ ಆಧಾರದ ಮೇಲೆ ತೆರಿಗೆ ಮುಕ್ತ ಚಿನ್ನಾಭರಣ ತರಲು ಅವಕಾಶ ನೀಡಲಾಗಿದೆ.

​ಹೊಸ ಕಸ್ಟಮ್ಸ್ ನಿಯಮ 2026: ಯಾರಿಗೆ ಎಷ್ಟು ಲಾಭ?

​ಭಾನುವಾರ ಫೆಬ್ರವರಿ 1 ರಂದು ಘೋಷಿಸಲಾದ ‘ಕಸ್ಟಮ್ಸ್ ಬ್ಯಾಗೇಜ್ ರೂಲ್ಸ್ 2026’ ಅನ್ವಯ, ಭಾರತಕ್ಕೆ ಮರಳುವ ಪ್ರವಾಸಿಗರು ಅಥವಾ ಅನಿವಾಸಿ ಭಾರತೀಯರು ಈ ಕೆಳಗಿನಂತೆ ತೆರಿಗೆ ರಹಿತವಾಗಿ ಚಿನ್ನಾಭರಣ ತರಬಹುದು:

  • ಮಹಿಳಾ ಪ್ರಯಾಣಿಕರು: ಗರಿಷ್ಠ 40 ಗ್ರಾಂ ವರೆಗೆ ಚಿನ್ನಾಭರಣ (ಯಾವುದೇ ಮೌಲ್ಯದ ಮಿತಿ ಇಲ್ಲದೆ).
  • ಪುರುಷ ಪ್ರಯಾಣಿಕರು: ಗರಿಷ್ಠ 20 ಗ್ರಾಂ ವರೆಗೆ ಚಿನ್ನಾಭರಣ (ಯಾವುದೇ ಮೌಲ್ಯದ ಮಿತಿ ಇಲ್ಲದೆ).

ಹಿಂದಿನ ನಿಯಮ ಹೇಗಿತ್ತು?: ಈ ಮೊದಲು ಮಹಿಳೆಯರಿಗೆ 40 ಗ್ರಾಂ (ಗರಿಷ್ಠ 1 ಲಕ್ಷ ರೂ. ಮೌಲ್ಯ) ಮತ್ತು ಪುರುಷರಿಗೆ 20 ಗ್ರಾಂ (ಗರಿಷ್ಠ 50 ಸಾವಿರ ರೂ. ಮೌಲ್ಯ) ಮಿತಿ ಇತ್ತು. ಇಂದಿನ ಚಿನ್ನದ ದರದಲ್ಲಿ 50 ಸಾವಿರಕ್ಕೆ ಕೇವಲ 6-7 ಗ್ರಾಂ ಚಿನ್ನ ಮಾತ್ರ ಬರುತ್ತಿತ್ತು, ಇದು ಪ್ರಯಾಣಿಕರಿಗೆ ಕಿರುಕುಳವಾಗಿ ಪರಿಣಮಿಸಿತ್ತು.

​”ವಾಸ್ತವಕ್ಕೆ ಹತ್ತಿರವಾದ ನಿರ್ಧಾರ” – ಸಚಿವೆ ನಿರ್ಮಲಾ ಸೀತಾಮನ್

​ಬಜೆಟ್ ಭಾಷಣದಲ್ಲಿ ಈ ಬದಲಾವಣೆಯ ಕುರಿತು ಮಾತನಾಡಿದ ಹಣಕಾಸು ಸಚಿವರು, “ಅಂತರಾಷ್ಟ್ರೀಯ ಪ್ರಯಾಣಿಕರ ನಿಜವಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಬ್ಯಾಗೇಜ್ ನಿಯಮಗಳನ್ನು ಪರಿಷ್ಕರಿಸುತ್ತಿದ್ದೇವೆ. ಇಂದಿನ ಪ್ರಯಾಣದ ವಾಸ್ತವತೆ ಮತ್ತು ಚಿನ್ನದ ಬೆಲೆಗೆ ಅನುಗುಣವಾಗಿ ಈ ಸ್ಪಷ್ಟತೆ ನೀಡಲಾಗಿದೆ,” ಎಂದು ತಿಳಿಸಿದ್ದಾರೆ.

​ಈ ಕುರಿತು ಭಾರತೀಯ ಹಣಕಾಸು ಸಚಿವಾಲಯ ಈಗಾಗಲೇ ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಿದೆ. ಇದರಿಂದಾಗಿ ಇನ್ಮುಂದೆ ದುಬೈ ಅಥವಾ ಇತರ ವಿದೇಶಗಳಿಂದ ಮದುವೆ ಅಥವಾ ಶುಭ ಸಮಾರಂಭಗಳಿಗೆ ಊರಿಗೆ ಬರುವ ಕನ್ನಡಿಗರು ಕಸ್ಟಮ್ಸ್ ತಪಾಸಣೆಯ ಮೌಲ್ಯದ ಕಿರಿಕಿರಿ ಇಲ್ಲದೆ ನೆಮ್ಮದಿಯಿಂದ ಬರಬಹುದಾಗಿದೆ.

ಕನ್ನಡ ಸಾಮ್ರಾಟ್ ವಿಶ್ಲೇಷಣೆ: ಬಂಗಾರದ ಬೆಲೆ ಏರಿಕೆಯಾಗಿದ್ದರೂ ಹಳೆಯ ಮೌಲ್ಯದ ಮಿತಿಯನ್ನೇ ಮುಂದುವರಿಸಿದ್ದು ಅನಿವಾಸಿ ಭಾರತೀಯರಿಗೆ ದೊಡ್ಡ ಅನ್ಯಾಯವಾಗಿತ್ತು. ಈಗ ಸರ್ಕಾರ ತೂಕಕ್ಕೆ ಮಾತ್ರ ಪ್ರಾಮುಖ್ಯತೆ ನೀಡಿರುವುದು ಸ್ವಾಗತಾರ್ಹ. ಇದು ಕೇವಲ ತೆರಿಗೆ ವಿನಾಯಿತಿ ಮಾತ್ರವಲ್ಲ, ಕಸ್ಟಮ್ಸ್ ವಿಮಾನ ನಿಲ್ದಾಣಗಳಲ್ಲಿ ಜನಸಾಮಾನ್ಯರಿಗೆ ಆಗುತ್ತಿದ್ದ ಅನಗತ್ಯ ತಪಾಸಣೆ ಮತ್ತು ಕಿರುಕುಳಕ್ಕೂ ಬ್ರೇಕ್ ಹಾಕಲಿದೆ.

ನಿಮಗೆ ಈ ಮಾಹಿತಿ ಉಪಯುಕ್ತವೆನಿಸಿದರೆ ನಿಮ್ಮ ಅನಿವಾಸಿ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!

#mydubai #dubaikannadigaru #uaekannada

5 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು